Friday 16 July, 2010

ಹೇಳು ನಾ ಕಾಯಲೇನು?

ಎಲ್ಲಾದರೂ ಆದೀತು,
ಆ ನದಿಯ ದಂಡೆಯಾದರೂ
ಈ ತೀರದ ಬಂಡೆಯಾದರೂ
ನೀನೆಲ್ಲಿರುವೆಯೆಂದು ಗೊತ್ತಿಲ್ಲದಿರುವಾಗ...

ಮನವ ಹೊತ್ತೊಯ್ಯಲ್ಲಿ 
ಅಪ್ಪಳಿಸಿದ ಅಲೆಗಳಿಂದು
ಗುರಿಯೇ  ಇಲ್ಲದಿರುವಾಗ
ನಾವಿಕನೇಕೆ? ನೌಕೆಯೇಕೆ?
ಹೋಗಿ ಸೇರಲಿ ಎಲ್ಲಾದರೂ
ಮನಸು ಮೈಮರೆಯುವಲ್ಲಿಗೆ

ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ 
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?

ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ
ಬರುವಿಕೆಯ ಕಾಯುತಿರುವೆನೆಂದು 
ಹೇಳಿರುವುದು ಸುಳ್ಳಾಗಿರುವಾಗ
ನೀ ಬರುವ ಸೂಚನೆಯೂ ಇಲ್ಲ

ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..

ಹೇಗಾದರೂ ಸರಿ...
ಒಂದು ಹಿಡಿ ಪ್ರೀತಿಯ
ಕೊಡುವೆಯೇನು?
ಹೇಳು, ಹೇಳು,
ನಾ ಕಾಯಲೇನು?

20 comments:

Bhat Chandru said...

ಉಳಿಯದಿರಲಿ ಹೆಜ್ಜೆ ಗುರುತು
ಹಿಂಬಾಲಿಸದಿರಲಿ ನೆರಳು...

ನಿಮ್ಮ blog title ತುಂಬಾ ಚೆನ್ನಾಗಿದೆ.
ಕವನ ಹಿಡಿಸಿತು :-)

ಸೀತಾರಾಮ. ಕೆ. / SITARAM.K said...

ಚೆಂದದ ಕವನ!
ದೊರಕೀತೇನೋ? ಎಂದು ಕನಸ ಅರಸುತ್ತಾ, ಸಿಕ್ಕಲ್ಲೆಲ್ಲಾ ತಿರುಗುವ ಬದುಕಿನ ಕಟೋರ ವಾಸ್ತವ ದೊರಕ್ಕಿದ್ದು. ಬೇಡಿದ್ದೆ ದೊರಕೀತೆ? ದೊರಕಬೇಕಾದದ್ದು ದೊರಕಿತೆ? ಒಟ್ಟಿಗೆ ಏನೋ ಒಂದು ದೊರಕಿತೆ?
ಎಲ್ಲ ಆಯಾಮಗಳ ನಡುವೆ ಒಂದು ಹಿಡಿ ಪ್ರೀತಿಯ ತವಕ ಜೀವನವೆಲ್ಲಾ ಕಾಯಿಸುತ್ತೆ ಅಲ್ಲವಾ....

Dr.D.T.Krishna Murthy. said...

'ಗುರಿಯೇಇಲ್ಲದಿರುವಾಗ,ನಾವಿಕನೇಕೆ?ನೌಕೆಯೇಕೆ?'.ಚೆಂದದ ಸಾಲುಗಳು.ಒಳ್ಳೆಯ ಕವನ.

ನಾಗರಾಜ್ .ಕೆ (NRK) said...

"ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?" beautiful lines.
ಕವನದ ಎಲ್ಲ ಸಾಲುಗಳು ತುಂಬಾ ಚೆನ್ನಾಗಿವೆ
ಭಾವದ ಬುಗ್ಗೆಯೋಡೆತ್ತೆ . ಖುಷಿಯಾಯಿತು

Karthik Kamanna said...

ಬಯಕೆಯ ಭಾರಕ್ಕೆ ಬೆನ್ನು ಬಾಗುವ ಕಲ್ಪನೆ ಬಹಳ ಚೆನ್ನಾಗಿದೆ.. ಭಾವನೆ ಚೆನ್ನಾಗಿ ವ್ಯಕ್ತವಾಗಿದೆ! ಸುಂದರ ಕವಿತೆ.

Dileep Hegde said...

ಜ್ಯೋತಿ...
ಚೆಂದದ ಕವನ..
"ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ"
ತುಂಬಾ ಇಷ್ಟವಾಯ್ತು ಈ ಸಾಲುಗಳು..

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?
hmmm nice line....kavana channagidae:)

ಅನಂತ್ ರಾಜ್ said...

ಕವನ ತು೦ಬಾ ಮೆಚ್ಚುಗೆ ಆಯಿತು ಜ್ಯೋತಿ."ನಿನ್ನ ಇರುವಿಕೆಯ ಸುಳಿವಿಲ್ಲ ನನ್ನೊಳಗೆ.. 'ನಾನು' ತುಂಬಿರುವಾಗ.. ಬರುವಿಕೆಯ ಕಾಯುತಿರುವೆನೆಂದು ಹೇಳಿರುವುದು ಸುಳ್ಳಾಗಿರುವಾಗ... ನೀ ಬರುವ ಸೂಚನೆಯೂ ಇಲ್ಲ" ತು೦ಬಾ ಅರ್ಥಪೂರ್ಣವೆನಿಸಿತು.ವಾಸ್ತವಿಕತೆಯಲ್ಲಿ ಎಲ್ಲರೂ ಮುಖವಾಡವನ್ನು ಧರಿಸಿಯೇ ಇರುತ್ತಾರೆ. "ನಾನು" ಎ೦ಬುದು ಬಿಟ್ಟಿದ್ದೇನೆ ಅನ್ನುವುದು ಮಿಥ್ಯವಾದ ಮಾತು ಅನಿಸುತ್ತದೆ.

ಶುಭಾಶಯಗಳು
ಅನ೦ತ್

ಸಾಗರದಾಚೆಯ ಇಂಚರ said...

ಚೆಂದದ ಕವನ
ಹೀಗೆಯೇ ಬರೆಯುತ್ತಿರಿ

Sushilkumar said...

tumba chennagide kanri...
keep writing..... :)

ಮನದಾಳದಿಂದ............ said...

ಚಂದದ ಕವನ...........
ಪದಗಳ ಜೋಡಣೆ ಚನ್ನಾಗಿತ್ತು.............

Ittigecement said...

ಪದಗಳು..ಭಾವಗಳು ಸೊಗಸಾಗಿವೆ... !

very nice poem !

Vinay Hegde said...

kavana oodidre...preeti ilde iddaru preeti huttuvantide.... chenaagide pada jodane..!!! I liked it...!!!

Priya Hegde said...

Tumba Chennagiddu Jyoti.... I liked it so much... Arthapoorna vada kavana....

ಮನಸು said...

super kavana haage blog name matte aa hejjeya foto

V.R.BHAT said...

Nice Poem, Infact good effort! Thanks

ಅನಿಲ್ ಬೇಡಗೆ said...

ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..
--
ಈ ಸಾಲುಗಳು ನನ್ನ ಮನದಲ್ಲಿ ಏನೋ ಸಂಕಟ ತಳಮಳ ಉಂಟುಮಾಡಿದೆ....
ಚೆಂದದ ಕವನ..

ಹಾಗೆ ಭೇಟಿ ಕೊಡಿ..
www.pennupaper.blogspot.com

Guruprasad . Sringeri said...

ಚೆನ್ನಾಗಿದೆ, ಐದನೇ ಪ್ಯಾರಾ ಹೆಚ್ಚು ಇಷ್ಟವಾಯಿತು :)

Jyoti Hebbar said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

venkat.bhats said...

chenda kavana,ishta aatu